<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-8987342648027638234</id><updated>2011-08-22T01:13:31.513-07:00</updated><category term='enguru.blogspor.com'/><title type='text'>ಸಮಯದ ಗೊಂಬೆ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://samayadagombhe.blogspot.com/feeds/posts/default'/><link rel='self' type='application/atom+xml' href='http://www.blogger.com/feeds/8987342648027638234/posts/default?max-results=100'/><link rel='alternate' type='text/html' href='http://samayadagombhe.blogspot.com/'/><link rel='hub' href='http://pubsubhubbub.appspot.com/'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><generator version='7.00' uri='http://www.blogger.com'>Blogger</generator><openSearch:totalResults>6</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-8987342648027638234.post-499471881697777931</id><published>2008-03-28T08:31:00.000-07:00</published><updated>2008-03-28T08:42:37.573-07:00</updated><title type='text'>ಬಯಲು ಸೀಮೆ ಗಾಂಧಿಗೆ  ಗೌರವ ಡಾಕ್ಟರೇಟ್</title><content type='html'>&lt;a href="http://4.bp.blogspot.com/_6d-mh_FQ_3k/R-0Rz5kRUSI/AAAAAAAAAGw/lOgh4VX_yoI/s1600-h/kar_rajas_06_3.jpg"&gt;&lt;img id="BLOGGER_PHOTO_ID_5182818329497260322" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_6d-mh_FQ_3k/R-0Rz5kRUSI/AAAAAAAAAGw/lOgh4VX_yoI/s320/kar_rajas_06_3.jpg" border="0" /&gt;&lt;/a&gt;&lt;br /&gt;&lt;div&gt;ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.&lt;br /&gt;ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.&lt;br /&gt;ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.&lt;br /&gt;ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .&lt;br /&gt;ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ&lt;br /&gt;. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.&lt;br /&gt;ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-499471881697777931?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/499471881697777931/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=499471881697777931' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/499471881697777931'/><link rel='self' type='application/atom+xml' href='http://www.blogger.com/feeds/8987342648027638234/posts/default/499471881697777931'/><link rel='alternate' type='text/html' href='http://samayadagombhe.blogspot.com/2008/03/blog-post.html' title='ಬಯಲು ಸೀಮೆ ಗಾಂಧಿಗೆ  ಗೌರವ ಡಾಕ್ಟರೇಟ್'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_6d-mh_FQ_3k/R-0Rz5kRUSI/AAAAAAAAAGw/lOgh4VX_yoI/s72-c/kar_rajas_06_3.jpg' height='72' width='72'/><thr:total>0</thr:total></entry><entry><id>tag:blogger.com,1999:blog-8987342648027638234.post-7263255478188208968</id><published>2008-02-21T04:37:00.001-08:00</published><updated>2008-02-21T04:58:25.471-08:00</updated><category scheme='http://www.blogger.com/atom/ns#' term='enguru.blogspor.com'/><title type='text'>ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು</title><content type='html'>ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು!&lt;br /&gt;&lt;br /&gt;ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು?&lt;br /&gt;&lt;br /&gt;ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕೊಂಡಿದಾರೆ? ನಿಧಾನವಾಗಿ - ಅಂದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆಯಿಂದ ಏನು ಪಡ್ಕೋಬೇಕೋ ಅದನ್ನೂ ಕೈಬಿಡದೆ - ಕಲಿಕೆಯ ಸೌಲಭ್ಯವನ್ನ ಕರ್ನಟಕದ ಮುಲೆಮೂಲೆಗಳಲ್ಲಿ ಅಡಗಿರೋ ಪ್ರತಿಭೆಗಳಿಗೆಲ್ಲಾ ಮುಟ್ಟಿಸೋ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಬೇಕು. ಕನಸೇ ಕಾಣದೆ ಹೋದರೆ ನನಸಾಗೋದು ಹೇಗೆ ಗುರು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-7263255478188208968?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/7263255478188208968/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=7263255478188208968' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/7263255478188208968'/><link rel='self' type='application/atom+xml' href='http://www.blogger.com/feeds/8987342648027638234/posts/default/7263255478188208968'/><link rel='alternate' type='text/html' href='http://samayadagombhe.blogspot.com/2008/02/blog-post_21.html' title='ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><thr:total>0</thr:total></entry><entry><id>tag:blogger.com,1999:blog-8987342648027638234.post-2419170837334539896</id><published>2008-02-20T07:01:00.000-08:00</published><updated>2008-02-20T07:02:33.472-08:00</updated><title type='text'>ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ</title><content type='html'>ಕಡಲ ತಡಿಯಲಿ ಕನ್ನಡ ಡಿಂಡಿಮ &lt;br /&gt;&lt;br /&gt;ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ&lt;br /&gt; &lt;br /&gt;ಕಳೆದ 75 ವರ್ಷಗಳಲ್ಲಿ ಕನ್ನಡದಲ್ಲಿ ತಯಾರಾಗಿರುವ ಸುಮಾರು 2500 ಚಿತ್ರಗಳಲ್ಲಿ ಕನಿಷ್ಠ 700 ಚಿತ್ರಗಳು ಸಾಹಿತ್ಯ ಕೃತಿಗಳನ್ನಾಧರಿಸಿವೆ. ಅಕ್ಷರ ಮಾಧ್ಯಮದ ಪ್ರಭಾವ ಇಷ್ಟು ಗಾಢ!&lt;br /&gt;&lt;br /&gt; &lt;br /&gt; &lt;br /&gt;ಪಿ. ಶೇಷಾದ್ರಿ&lt;br /&gt;&lt;br /&gt;ಖ್ಯಾತ ಚಲನ ಚಿತ್ರ ನಿರ್ದೇಶಕ&lt;br /&gt; &lt;br /&gt;'ನೀವು ಎಷ್ಟು ಪುಸ್ತಕ ಓದಿದ್ದೀರಿ?' &lt;br /&gt;ಎಂಬ ಪ್ರಶ್ನೆ ಕೇಳಿದಾಗ ಸಿಗುವ ಉತ್ತರಕ್ಕಿಂತ, 'ನೀವು ಎಷ್ಟು ಸಿನಿಮಾ ನೋಡಿದ್ದೀರಿ?' ಎಂಬ ಪ್ರಶ್ನೆಗೆ ಸಿಗುವ ಉತ್ತರ ಖಂಡಿತ ಭಿನ್ನವಾಗಿರುತ್ತದೆ! ನಮ್ಮ ನಡುವೆ ಪುಸ್ತಕ ಓದದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗಬಹುದೇನೋ, ಆದರೆ ಸಿನಿಮಾ ನೋಡದ ಕಣ್ಣುಗಳು ಸಿಗುವುದು ಸ್ವಲ್ಪ ದುಸ್ತರವೇ!&lt;br /&gt;ಹೌದು, ಈ ಸಿನಿಮಾದ ಮೋಡಿಯೇ ಅಂಥದ್ದು. ಈ ದೃಶ್ಯಮಾಧ್ಯಮದ ರಾಜನಿಗೆ ಇಷ್ಟೆಲ್ಲ ಮನ್ನಣೆ ಸಿಕ್ಕಿರುವುದರಲ್ಲಿ ಸಾಹಿತ್ಯ ಲೋಕದ ಕೊಡುಗೆಯೂ ಕಡಿಮೆಯೇನಿಲ್ಲ. ಚಲನಚಿತ್ರ ಮಾಧ್ಯಮವು ಅತ್ಯಂತ ಪ್ರಬಲವಾದ ಸಂವಹನ ಮಾಧ್ಯಮವಾಗಿ ಬೆಳೆದು ಉಳಿದಿರುವುದಕ್ಕೆ ಅದರ ಅತ್ಯಪೂರ್ವ ರೀತಿಯ 'ಕಥಾನಕ' ಸಾಧ್ಯತೆ ಒಂದು ಪ್ರಮುಖ ಕಾರಣ. ಹಾಗಾಗಿಯೇ ಯಾವುದೇ ಸಿನಿಮಾದ ಆತ್ಮವು 'ಕಥೆ' ಮತ್ತು ಕಥಾವಸ್ತುವಾಗಿದೆ. &lt;br /&gt;ಪ್ರಕಟಿತ ಕಥೆಯನ್ನು ಆಧರಿಸಿದ ಜಗತ್ತಿನ ಮೊದಲ ಚಿತ್ರ (ದಿ ಗ್ರೇಟ್ ಟ್ರೈನ್ ರಾಬರಿ) ನಿರ್ಮಾಣವಾದದ್ದು 104 ವರ್ಷಗಳ ಹಿಂದೆ, 1903ರಲ್ಲಿ. ಆ ಚಿತ್ರ ಅಂದು ಗಳಿಸಿದ ಯಶಸ್ಸು ಸಿನಿಮಾಕ್ಕಿರುವ ಒಂದು ಬಹುಮುಖ್ಯ ಶಕ್ತಿ ಅಥವಾ ದೌರ್ಬಲ್ಯವನ್ನು ಆಗಲೇ ದಾಖಲಿಸಿಕೊಟ್ಟಿತು. ಕಳೆದ 75 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರಗಳ ಸಂಖ್ಯೆ ಸರಿ ಸುಮಾರು ಎರಡೂವರೆ ಸಾವಿರದಷ್ಟು. ಇದರಲ್ಲಿ ಕನಿಷ್ಠ 700 ಚಿತ್ರಗಳು ಸಾಹಿತ್ಯಲೋಕದ ಪ್ರಕಾರಗಳಾದ ಕಥೆ/ಕಾವ್ಯ/ನಾಟಕ/ ಅಥವಾ ಕಾದಂಬರಿಗಳನ್ನು ಆಧರಿಸಿವೆ ಎನ್ನಬಹುದು. ಹಾಗಾಗಿ 'ಅಕ್ಷರಮಾಧ್ಯಮ'ದ ಪ್ರಭಾವ 'ದೃಶ್ಯಮಾಧ್ಯಮ'ದ ಮೇಲೆ ನಿರಂತರವಾಗಿ ಇದ್ದೇ ಇದೆ. ಕನ್ನಡದ ಪೂರ್ಣಪ್ರಮಾಣದ ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಗೊಂಡದ್ದು 1921ರಲ್ಲಿ, 'ನಿರುಪಮಾ' ಹೆಸರಿನಲ್ಲಿ. ಇದು ನಾಟಕ ಕೃತಿ ಆಧರಿಸಿದ ಮೂಕಿಚಿತ್ರ. ಆನಂತರ, ಕೈಲಾಸಂ 'ವಸಂತಸೇನಾ' (1929), ಶಿವರಾಮ ಕಾರಂತರ 'ಭೂತರಾಜ್ಯ' (1929) ಬಂದವು.&lt;br /&gt;ಚಿತ್ರರಂಗದ ಆರಂಭದಲ್ಲಿ ಕನ್ನಡದ ರಂಗಕೃತಿಗಳೇ ಚಿತ್ರಭಾಷೆಗೆ ತರ್ಜುಮೆಯಾಗುತ್ತಾ ಬಂದವು. 'ಸತಿ ಸುಲೋಚನ', 'ಸದಾರಮೆ', 'ಸಂಸಾರನೌಕೆ', 'ಭಕ್ತಧ್ರುವ', 'ಸತ್ಯಹರಿಶ್ಚಂದ್ರ', 'ಚಂದ್ರಹಾಸ' ಮುಂತಾದವು... ಹೀಗೆಯೇ ಆಧುನಿಕ ನಾಟಕಗಳಿಗೆ ಬಂದರೆ ಮಾಸ್ತಿಯವರ 'ಕಾಕನಕೋಟೆ', ಮೂರ್ತಿರಾಯರ 'ಆಷಾಢಭೂತಿ', ಮತ್ತು 'ಕಳಸಾಪುರದ ಹುಡುಗರು', 'ಸಿಕ್ಕು', 'ಋಷ್ಯಶೃಂಗ', 'ನಾಗಮಂಡಲ' ಹೀಗೆ...&lt;br /&gt;ಕೃಷ್ಣಮೂರ್ತಿ ಪುರಾಣಿಕರ 'ಧರ್ಮದೇವತೆ'ಯನ್ನು ಆಧರಿಸಿದ 'ಕರುಣೆಯೇ ಕುಟುಂಬದ ಕಣ್ಣು' (1962) ತಾಂತ್ರಿಕವಾಗಿ ಕಾದಂಬರಿ ಆಧಾರಿತ ಮೊದಲ ಚಿತ್ರ ಎಂದು ಹೇಳಬಹುದು. ನಂತರ ಇದೇ ಲೇಖಕರ 'ಕುಲವಧು' ಹಾಗೂ ತರಾಸು ಅವರ 'ಚಂದವಳ್ಳಿಯ ತೋಟ' ಈ ಪರಂಪರೆಯನ್ನು ಮುಂದುವರಿಸಿದವು. 1966ರಲ್ಲಿ ತೆರೆಕಂಡ 'ಸಂಧ್ಯಾರಾಗ' ಅನಕೃ ಅವರ ಕಾದಂಬರಿಯನ್ನು ಆಧರಿಸಿದ್ದು. ಕನ್ನಡ ಚಿತ್ರರಂಗ ಇಲ್ಲಿಯವರೆಗೆ ಹಲವಾರು ಸಾಹಿತ್ಯ ದಿಗ್ಗಜರ ಸೇವೆಯನ್ನು ಪಡೆದಿದೆ. 'ಸತಿ ಸುಲೋಚನ' (1934) ಚಿತ್ರಕ್ಕೆ ಚಿತ್ರಸಾಹಿತ್ಯ ಒದಗಿಸಿದ ಬೆಳ್ಳಾವೆ ನರಹರಿಶಾಸ್ತ್ರಿಗಳಿಂದ ಹಿಡಿದು, ದೇವುಡುರಂಥವರನ್ನು ಒಳಗೊಂಡಂತೆ, ಕುವೆಂಪು, ಮಾಸ್ತಿ, ಬೇಂದ್ರೆ, ಶಿವರಾಮಕಾರಂತ, ಅನಕೃ, ಕೆ.ಎಸ್. ನರಸಿಂಹಸ್ವಾಮಿ, ಗೊರೂರು, ತರಾಸು, ತ್ರಿವೇಣಿ, ವಾಣಿ, ಎಂ.ಕೆ.ಇಂದಿರಾ, ವಿ.ಎಂ. ಇನಾಂದಾರ್, ಗಿರೀಶ ಕಾರ್ನಾಡ, ಎಸ್.ಎಲ್. ಭೈರಪ್ಪ, ಅನಂತಮೂರ್ತಿ, ಆಲನಹಳ್ಳಿ, ಚಿತ್ತಾಲ, ಚಂದ್ರಶೇಖರ ಕಂಬಾರ, ತೇಜಸ್ವಿ, ಲಂಕೇಶ್, ಬೊಳುವಾರು... ಹೀಗೆ ಇನ್ನೂ ಮುಂತಾದ ಅನೇಕ ಪ್ರಖ್ಯಾತ ಸಾಹಿತಿಗಳನ್ನು ಈ ಕ್ಷೇತ್ರ ದುಡಿಸಿಕೊಂಡಿದೆ.&lt;br /&gt;ಕನ್ನಡದ ನಿರ್ದೇಶಕರಲ್ಲಿ ಹೆಚ್ಚು ಕಾದಂಬರಿಗಳನ್ನೇ ಆಧರಿಸಿ ಚಿತ್ರಮಾಡಿದ ಖ್ಯಾತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲಬೇಕು. ಅವರು ನಿರ್ದೇಶಿಸಿದ 33 ಚಿತ್ರಗಳಲ್ಲಿ ಹೆಚ್ಚಿನವು ಕಾದಂಬರಿಯನ್ನು ಆಧರಿಸಿದಂಥಹವು. 'ಬೆಳ್ಳಿಮೋಡ'ದಿಂದ ಆರಂಭವಾದ ಈ ಯಾತ್ರೆ 'ಗೆಜ್ಜೆಪೂಜೆ', 'ಶರಪಂಜರ', 'ನಾಗರಹಾವು', 'ಎಡಕಲ್ಲುಗುಡ್ಡದ ಮೇಲೆ', 'ಶುಭಮಂಗಳ', 'ಉಪಾಸನೆ', 'ಅಮೃತ ಘಳಿಗೆ', 'ಋಣಮುಕ್ತಳು'ಗಳಲ್ಲಿ ಮುಂದುವರಿಯಿತು. ಇವರು ನಿರ್ದೇಶಿಸಿದ 'ಕಥಾಸಂಗಮ' ಕನ್ನಡದ ಮೂರು ಸಣ್ಣ ಕಥೆಗಳನ್ನು ಆಧರಿಸಿ (ಗಿರಡ್ಡಿ ಗೋವಿಂದರಾಜು, ವೀಣಾ ಎಲಬುರ್ಗಿ, ಈಶ್ವರಚಂದ್ರ) ತಯಾರಾದ ಹೊಸಾ ಪ್ರಯೋಗ. ಹಾಗೆಯೇ 'ನಾಗರಹಾವು' ಕೂಡ ತ.ರಾ.ಸು. ಅವರ ಮೂರು ಕಾದಂಬರಿಗಳಾದ 'ನಾಗರಹಾವು', 'ಎರಡು ಹೆಣ್ಣು, ಒಂದು ಗಂಡು' ಮತ್ತು 'ಸರ್ಪಮತ್ಸರ'ಗಳನ್ನು ಆಧರಿಸಿದ ಚಿತ್ರ. ಈ ಚಿತ್ರ ಕಾದಂಬರಿಗಳಿಗಿಂತ ಹೆಚ್ಚು ಜನಪ್ರಿಯವಾಯಿತು. ಕಾದಂಬರಿಯಲ್ಲಿ ನಿರ್ಭಾವುಕವಾಗಿದ್ದ ನಾಯಕ ಪಾತ್ರಧಾರಿಯನ್ನು ಪುಟ್ಟಣ್ಣ ಇಲ್ಲಿ ಜೀವಂತವಾಗಿರಿಸಿದರು. ಜೊತೆಗೆ ಇದೇ ಚಿತ್ರದಲ್ಲಿ ಬರುವ ಚಾಮಯ್ಯ ಮೇಷ್ಟ್ರು ಪಾತ್ರ ಇಡೀ ಚಿತ್ರಕ್ಕೆ ಸಹಜತೆಯನ್ನು ತಂದುಕೊಟ್ಟು ಚಲನಚಿತ್ರವೊಂದರಲ್ಲಿ ಸೃಷ್ಟಿಯಾದ ಅತ್ಯುತ್ತಮ ಪಾತ್ರಗಳಲ್ಲೊಂದು ಎಂದು ಖ್ಯಾತವಾಯಿತು. ಆದರೆ ಕೃತಿಕಾರರು ಮಾತ್ರ ಚಿತ್ರವನ್ನು ಮೆಚ್ಚಲಲ್ಲಿ! ಇದನ್ನು ಕುರಿತು ತ.ರಾ.ಸು. 'ಇದು ನಾಗರಹಾವಲ್ಲ; ಕೇರೆಹಾವು' ಎಂದು ಜರೆದದ್ದೂ ನಡೆಯಿತು. ಆದರೂ ಈ ಚಿತ್ರ ವ್ಯಾಪಾರದ ದೃಷ್ಟಿಯಿಂದ ಯಶಸ್ವಿಯಾದದಷ್ಟೇ ಅಲ್ಲದೆ ಜನಪ್ರಿಯತೆಯನ್ನೂ ಪ್ರಶಸ್ತಿಗಳನ್ನೂ ಒಟ್ಟೊಟ್ಟಿಗೇ ಪಡೆಯಿತು. &lt;br /&gt;'ವಂಶವೃಕ್ಷ' ಅದೇ ಹೆಸರಿನ ಎಸ್.ಎಲ್.ಭೈರಪ್ಪನವರ ಕಾದಂಬರಿಯನ್ನಾಧರಿಸಿ ಗಿರೀಶ್ ಕಾರ್ನಾಡ ಹಾಗೂ ಬಿ.ವಿ. ಕಾರಂತ್ ಜೋಡಿ ನಿರ್ದೇಶಿಸಿದ ಚಿತ್ರ. ಇದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಕೂಡ ಗಳಿಸಿತು. ಇದರ ಕಾದಂಬರಿ ಕತೃ ಭೈರಪ್ಪನವರಿಗೆ 1971ರ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯನ್ನು ನೀಡಿದಾಗ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ತಾವು ಸಿನಿಮಾಗಾಗಿ ಕಥೆ ಬರೆಯಲಿಲ್ಲವೆಂದೂ ತಮ್ಮ ಕಥೆಯನ್ನು ಸಿನಿಮಾ ಕಥೆಯಂತೆ ಪರಿಗಣಿಸಿರುವುದು ತಮಗೆ ಅವಮಾನವೇ ಆಗಿದೆಯೆಂದೂ ಹೇಳುವ ಧಾಟಿಯಲ್ಲಿ ಭೈರಪ್ಪನವರು ಬಹಿರಂಗ ಹೇಳಿಕೆಯೊಂದನ್ನು ನೀಡಿದರು. ಅವರ ಈ ಧೋರಣೆಗೆ ಪ್ರತಿಭಟನೆಗಿಂತ ಹೆಚ್ಚಾಗಿ ಪುರಸ್ಕಾರವೇ ಸಿಕ್ಕಿತು!&lt;br /&gt;70ರ ದಶಕ ಕನ್ನಡದ ಚಿತ್ರರಂಗದ ಮಟ್ಟಿಗೆ ಸುವರ್ಣಯುಗ. ಸಾಹಿತ್ಯ ಲೋಕದ ಅನೇಕ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸಿದವು. ಹಾಗಾಗಿಯೇ ಹೊಸ ಅಲೆ ಎಂಬ ಪ್ರಕಾರ ಕೂಡ ಜನಪ್ರಿಯವಾಗಿ ಇಡೀ ಭಾರತದ ಗಮನ ಸೆಳೆಯಿತು. ಈ ದಶಕದಲ್ಲಿ, 'ಸಂಸ್ಕಾರ', 'ಕಾಡು', 'ವಂಶವೃಕ್ಷ', 'ತಬ್ಬಲಿಯು ನೀನಾದೆ ಮಗನೆ', 'ಘಟಶ್ರಾದ್ಧ', 'ಹೇಮಾವತಿ', 'ಮೂರುದಾರಿಗಳು', 'ಅಬಚೂರಿನ ಪೋಸ್ಟಾಫೀಸ್', 'ಮಾಡಿ ಮಡಿದವರು', 'ಹಂಸಗೀತೆ', 'ಚೋಮನದುಡಿ', 'ಪಲ್ಲವಿ' ಮುಂತಾದ ಕಾದಂಬರಿ-ಕಥೆ ಆಧಾರಿತ ಚಿತ್ರಗಳು ಬಂದವು. ಮುಂದಿನ ವರ್ಷಗಳಲ್ಲೂ ಇದು ಮುಂದುವರಿದು, 'ಬ್ಯಾಂಕರ್ ಮಾರ್ಗಯ್ಯ', 'ತಬರನಕತೆ', 'ಭುಜಂಗಯ್ಯನ ದಶಾವತಾರ', 'ಮೈಸೂರು ಮಲ್ಲಿಗೆ', 'ಸಂಗ್ಯಾಬಾಳ್ಯಾ', 'ಗಂಗವ್ವ ಗಂಗಾಮಾಯಿ', 'ಮಲೆಗಳಲ್ಲಿ ಮದುಮಗಳು', 'ತಾಯಿಸಾಹೇಬ', 'ಕಾನೂರು ಹೆಗ್ಗಡಿತಿ', 'ದೇವೀರಿ'(ಅಕ್ಕ), 'ಮುತ್ತು ಚ್ಚೇರ'(ಮುನ್ನುಡಿ), 'ದ್ವೀಪ', 'ಹಸೀನ'... ಮುಂತಾದ ಮೌಲ್ಯಾಧಾರಿತ ಕೃತಿಗಳಿಗೆ ದಾರಿತೋರಿತು. &lt;br /&gt;ಈ ಮಧ್ಯೆ 80ರ ದಶಕದ ಹೊತ್ತಿಗೆ ಹೊಸ ಅಲೆಯ ಪ್ರವಾಹ ತಗ್ಗಿತು. 'ಅಂತ', 'ಗಾಳಿಮಾತು', 'ಹೊಸಬೆಳಕು', 'ಹಾಲುಜೇನು', 'ಸಮಯದ ಗೊಂಬೆ', 'ಬಾಡದಹೂ' ಮುಂತಾದ ಚಿತ್ರಗಳು ನೆಪಮಾತ್ರಕ್ಕೆ ಕಾದಂಬರಿ ಆಧರಿಸಿದ ಚಿತ್ರಗಳು. ಇಲ್ಲೆಲ್ಲ ಪಾತ್ರದ ಹೆಸರು, ಕೆಲವು ಸಣ್ಣ ವಿಷಯಗಳನ್ನು ಕಾದಂಬರಿಯಿಂದ ಪಡೆದರೆ ಮುಗಿಯಿತು. ಉಳಿದಂತೆ ಕಾದಂಬರಿಯ ಯಾವ ಧ್ವನಿಯೂ ಚಿತ್ರದಲ್ಲಿ ಇರುತ್ತಿರಲಿಲ್ಲ. ಹೀಗೆ 80ರ ದಶಕದಲ್ಲಿ ಕ್ಷೀಣಿಸುತ್ತಾ ಬಂದ ಸಾಹಿತ್ಯ ಮತ್ತು ಸಿನಿಮಾ ಸಂಬಂಧ 90ರ ದಶಕದಲ್ಲಿ ಇನ್ನಷ್ಟು ವಿಷಮಿಸಿತು. ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಕಾದಂಬರಿ ಅಥವಾ ಸಿದ್ಧ ಸಾಹಿತ್ಯ ರೂಪ ಅವಲಂಬಿಸಿದ್ದವು. ಕನ್ನಡ ನೆಲಕ್ಕೆ ಒಗ್ಗುವ ಚಿತ್ರಗಳು ಕಣ್ಮರೆಯಾಗಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಮಿಕ್ಕ ಭಾರತೀಯ ಚಿತ್ರಗಳ ಅಂಧಾನುಕರಣೆ ಹೆಚ್ಚಾಯಿತು. ಇನ್ನು ಚಿತ್ರಸಂಗೀತದತ್ತ ಒಂದಿಷ್ಟು ಗಮನಹರಿಸುವುದಾದರೆ, ಸಿನಿಮಾ ಗೀತೆಗಳ ರಚನೆಯಲ್ಲಿ 'ಸಂಗೀತವೇ ಗಂಡ; ಸಾಹಿತ್ಯವೇ ಹೆಂಡತಿ' ಎನ್ನುವ ಸ್ಥಿತಿ ಈಗಲೂ ಮುಂದುವರಿದುಕೊಂಡೇ ಬಂದಿದೆ. ಗಂಡ ಹೇಳಿದ ಹಾಗೆ ಹೆಂಡತಿ ಕೇಳಬೇಕು ಎಂಬ ಸಂಪ್ರದಾಯದಂತೆ!? ಮೊದಲ ಟಾಕಿಚಿತ್ರ 'ಸತಿಸುಲೋಚನ'ದಲ್ಲಿ ಕೂಡ ಮೊದಲು ಹಾಡಿನ ಸ್ವರ ಪ್ರಸ್ತಾರವನ್ನು ಅಣಿ ಮಾಡಿಕೊಂಡು ಅದಕ್ಕೆ ಪದಗಳನ್ನು ಜೋಡಿಸಿ ಹಾಡುಗಳನ್ನಾಗಿ ಮಾಡಲಾಗಿತ್ತಂತೆ.&lt;br /&gt;1963ರಲ್ಲಿ ತೆರೆಗೆ ಬಂದ ಎಸ್.ಕೆ. ಚಾರಿ ನಿರ್ದೇಶಿತ 'ಗೌರಿ' ಪ್ರಪ್ರಥಮ ಬಾರಿಗೆ ಮಹಾಕವಿಗಳ ಕವಿತೆಗಳನ್ನು ಕನ್ನಡ ಚಿತ್ರಗಳಲ್ಲಿ ಅಳವಡಿಸುವುದನ್ನು ಪ್ರಾರಂಭಿಸಿದರು. ಕುವೆಂಪು ಅವರ 'ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು...', ಹಾಗೂ ಕೆ.ಎಸ್. ನರಸಿಂಹಸ್ವಾಮಿಗಳ 'ಇವಳು ಯಾರು ಬಲ್ಲೆಯೇನು?....' ಕವಿತೆಗಳು ಚಿತ್ರದ ಮೌಲ್ಯವನ್ನು ಹೆಚ್ಚಿಸಿದವು. ಮುಂದೆ ಪುಟ್ಟಣ್ಣ ಕಣಗಾಲ್ ದ.ರಾ. ಬೇಂದ್ರೆಯವರ, 'ಮೂಡಣ ಮನೆಯ...' ಹಾಡನ್ನು ಬಳಸಿದರು. ಇವರೇ ಮುಂದೆ ಜಿ.ಎಸ್. ಶಿವರುದ್ರಪ್ಪ, ಎಕ್ಕುಂಡಿ, ಸಿದ್ಧಲಿಂಗಯ್ಯ ಮುಂತಾದವರ ಕವಿತೆಗಳಿಗೆ ರಾಗ ಸಂಯೋಜಿಸಿದರು. ವೀ.ಸೀ.ಯವರ 'ಯಾವ ಜನ್ಮದ ಕಳೆಯೋ ಕಾಣೆನೋ...', ಬೇಂದ್ರೆಯವರ 'ಬಂದಿತೋ ಶೃಂಗಾರ ಮಾಸ..' ಗೋವಿಂದ ಪೈ ಅವರ 'ತಾಯೆ ಬಾರ ಮೊಗವ ತೋರ...', ಗೋಪಾಲಕೃಷ್ಣ ಅಡಿಗರ 'ಎಂಥ ಕಣ್ಣು...', ಲಕ್ಷ್ಮೀನಾರಾಯಣ ಭಟ್ಟರ 'ಎಂಥ ಮರುಳಯ್ಯ ಇದು ಎಂತ ಮರುಳು...', ಕುವೆಂಪು ಅವರ 'ನಾನೇ ವೀಣೆ, ನೀನೇ ತಂತಿ, ಅವನೇ ವೈಣಿಕ...', ಇವು ಇತರ ಕೆಲವು ಇಂಪಾದ ಸಾಹಿತ್ಯದ ಸೊಗಡಿರುವ ಗೀತೆಗಳು... ಹೀಗೆ ಸಾಹಿತ್ಯ, ನಾಟಕ, ಕಾವ್ಯ, ಕಥೆ, ಕಾದಂಬರಿ ಹಾಗೂ ಕವನಗಳನ್ನು ಬಳಸಿಕೊಂಡು ಕನ್ನಡಚಿತ್ರಗಳು ತಮ್ಮ ಮೌಲ್ಯ ಹೆಚ್ಚಿಸಿಕೊಂಡವು. ಇಷ್ಟೆಲ್ಲಾ ಆದರೂ ಶೈಕ್ಷಣಿಕ ಹಾಗೂ ಬೌದ್ಧಿಕ ವಲಯಗಳಲ್ಲಿ ಸಿನಿಮಾ ಬಗೆಗೆ ಹಿಂದಿನಂತೆ ಇಂದಿಗೂ ಕೀಳುಭಾವನೆ ಉಳಿದು ಬಂದಿದೆ. ಸರಳ ನಿರೂಪಣೆ, ಅಚ್ಚು ಹೊಯ್ದ ಪಾತ್ರಗಳು, ಪುನರಾವರ್ತಿತ ಸನ್ನಿವೇಶಗಳು, ಜೀವನಕ್ಕಿಂತ ಬೇರೆಯಾದ ಅವಾಸ್ತವ ಜಗತ್ತು ಇಲ್ಲಿ ಪ್ರತಿಬಿಂಬಿತವಾಗುತ್ತಿರುವುದೇ ಇದಕ್ಕೆ ಕಾರಣ. ಜೊತೆಗೆ ವ್ಯಾಪಾರೀಕರಣದ ಪ್ರಭಾವ ಇತ್ತೀಚಿನ ಚಲನಚಿತ್ರಗಳ ಮೇಲೆ ಆವರಿಸಿಕೊಂಡಿದೆ. ಇದರ ನಡುವೆ ಕಲೆಯನ್ನು ಹುಡುಕುವುದೆಲ್ಲಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-2419170837334539896?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/2419170837334539896/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=2419170837334539896' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/2419170837334539896'/><link rel='self' type='application/atom+xml' href='http://www.blogger.com/feeds/8987342648027638234/posts/default/2419170837334539896'/><link rel='alternate' type='text/html' href='http://samayadagombhe.blogspot.com/2008/02/blog-post_6197.html' title='ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><thr:total>0</thr:total></entry><entry><id>tag:blogger.com,1999:blog-8987342648027638234.post-1485859011790395503</id><published>2008-02-20T06:58:00.000-08:00</published><updated>2008-02-20T06:59:06.143-08:00</updated><title type='text'>ಚಿತ್ರ</title><content type='html'>೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.&lt;br /&gt;&lt;br /&gt;ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-1485859011790395503?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/1485859011790395503/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=1485859011790395503' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/1485859011790395503'/><link rel='self' type='application/atom+xml' href='http://www.blogger.com/feeds/8987342648027638234/posts/default/1485859011790395503'/><link rel='alternate' type='text/html' href='http://samayadagombhe.blogspot.com/2008/02/blog-post_7965.html' title='ಚಿತ್ರ'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><thr:total>0</thr:total></entry><entry><id>tag:blogger.com,1999:blog-8987342648027638234.post-862059660362634100</id><published>2008-02-20T06:53:00.000-08:00</published><updated>2008-02-20T06:54:45.862-08:00</updated><title type='text'>ಕೋಗಿಲೆ ಹಾಡಿದೆ ಕೇಳಿದೆಯ</title><content type='html'>ಚಿತ್ರ: ಸಮಯದ ಗೊಂಬೆ ೧೯೮೩ &lt;br /&gt;ಸಾಹಿತ್ಯ: ಚಿ||ಉದಯ ಶಂಕರ್&lt;br /&gt;ಸಂಗೀತ: ಎಂ.ರಂಗ ರಾವ್&lt;br /&gt;ಹಾಡಿರುವವರು: ಡಾ||ರಾಜ್, ಎಸ್.ಜಾನಕಿ&lt;br /&gt;&lt;br /&gt;ಕೋಗಿಲೆ ಹಾಡಿದೆ ಕೇಳಿದೆಯ&lt;br /&gt;ಹೊಸ ರಾಗವ ಹಾಡಿದೆ ಆಲಿಸೆಯ&lt;br /&gt;ಹೊಸ ಹೊಸ ಭಾವ ಕುಣಿಸುತ ಜೀವ&lt;br /&gt;ಮರೆಸುತ ನೋವ ಪ್ರೇಮವ ತುಂಬಿ&lt;br /&gt;&lt;br /&gt;ಅಮ್ಮನು ಕಂದನ ಕೂಗುವ ಹಾಗೆ&lt;br /&gt;ತಂಗಿಯು ಅಣ್ಣನ ಹುಡುಕುವ ಹಾಗೆ&lt;br /&gt;ಪ್ರೀತಿಯ ಚಿಲುಮೆ ಉಕ್ಕುವ ಹಾಗೆ&lt;br /&gt;ಕಾತರದಿಂದ ಪಂಚಮ ಸ್ವರದಿ&lt;br /&gt;ಕೊಳಲಿಂದ ಹೊರಬಂದ ಸಂಗೀತದಂತೆ&lt;br /&gt;&lt;br /&gt;ಕಾಣದ ಸಿರಿಯ ನೋಡಿದ ಹಾಗೆ&lt;br /&gt;ದೊರಕದ ಮಾಣಿಕ್ಯ ದೊರಕಿದ ಹಾಗೆ&lt;br /&gt;ಬಾಳಲಿ ಬೆಳಕು ಮೂಡಿದ ಹಾಗೆ&lt;br /&gt;ಸಡಗರ ಬದುಕಲಿ ತುಂಬುವ ಹಾಗೆ&lt;br /&gt;ಬಾಡಿದ ಬಳ್ಳಿ ಚಿಗುರಿದ ಹಾಗೆ&lt;br /&gt;ಇರುಳಲಿ ಜ್ಯೋತಿ ಬೆಳಗಿದ ಹಾಗೆ&lt;br /&gt;ಸವಿಯಾಗಿ ಇಂಪಾಗಿ ಆನಂದದಿಂದ&lt;br /&gt;&lt;br /&gt;ಕಂಗಳು ಕನಸು ಕಾಣುವ ಹಾಗೆ&lt;br /&gt;ತಿಂಗಳ ಬೆಳಕು ತುಂಬಿದ ಹಾಗೆ&lt;br /&gt;ಹೃದಯದ ನೈದಿಲೆ ಅರಳಿದ ಹಾಗೆ&lt;br /&gt;ಹರುಷದ ಹೊನಲು ಹೊಮ್ಮಿದ ಹಾಗೆ&lt;br /&gt;ನೆನಪಿನ ಅಲೆಯಲಿ ತೇಲಿದ ಹಾಗೆ&lt;br /&gt;ನೋವೋ ನಲಿವೋ ತಿಳಿಯದ ಹಾಗೆ&lt;br /&gt;ಸಂಗೀತ ಸುಧೆಯಿಂದ ಸುಖ ನೀಡುವಂತೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-862059660362634100?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/862059660362634100/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=862059660362634100' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/862059660362634100'/><link rel='self' type='application/atom+xml' href='http://www.blogger.com/feeds/8987342648027638234/posts/default/862059660362634100'/><link rel='alternate' type='text/html' href='http://samayadagombhe.blogspot.com/2008/02/blog-post_20.html' title='ಕೋಗಿಲೆ ಹಾಡಿದೆ ಕೇಳಿದೆಯ'/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><thr:total>0</thr:total></entry><entry><id>tag:blogger.com,1999:blog-8987342648027638234.post-4998338297531254479</id><published>2008-02-20T06:48:00.000-08:00</published><updated>2008-02-20T06:51:58.432-08:00</updated><title type='text'></title><content type='html'>ಸಮಯದ ಗೊಂಬೆ&lt;br /&gt; &lt;br /&gt; &lt;br /&gt;ಬಿಡುಗಡೆ ವರ್ಷ :೧೯೮೪ &lt;br /&gt;ಚಿತ್ರ ನಿರ್ಮಾಣ ಸಂಸ್ಥೆ :ಶ್ರೀ ತ್ರಿಪುರಸುಂದರಿ ಕಂಬೈನ್ಸ್ &lt;br /&gt;ನಾಯಕ: ಡಾ.ರಾಜ್‍ಕುಮಾರ್ &lt;br /&gt;ನಾಯಕಿ: ರೂಪಾದೇವಿ &lt;br /&gt;ಪೋಷಕ ವರ್ಗ: ಮೇನಕ, ಶಶಿಕಲಾ, ಕಾಂಚನ &lt;br /&gt;ಸಂಗೀತ ನಿರ್ದೇಶನ :ಎಂ.ರಂಗರಾವ್ &lt;br /&gt;ಕಥೆ / ಕಾದಂಬರಿ :ಚಿತ್ರಲೇಖ &lt;br /&gt;ಚಿತ್ರಕಥೆ  ಸಂಭಾಷಣೆ ಸಾಹಿತ್ಯ :ಚಿ.ಉದಯಶಂಕರ್ &lt;br /&gt;ಹಿನ್ನೆಲೆ ಗಾಯನ: ಡಾ.ರಾಜ್‍ಕುಮಾರ್ , ಎಸ್.ಜಾನಕಿ &lt;br /&gt;ಛಾಯಾಗ್ರಹಣ :ಬಿ.ಸಿ.ಗೌರಿಶಂಕರ್ &lt;br /&gt;ನೃತ್ಯ  :&lt;br /&gt;ಸಾಹಸ  :&lt;br /&gt;ಸಂಕಲನ  :&lt;br /&gt;ನಿರ್ದೇಶನ :ದೊರೆ-ಭಗವಾನ್ &lt;br /&gt;ನಿರ್ಮಾಪಕರು :ದೊರೆ-ಭಗವಾನ್ &lt;br /&gt;ಪ್ರಶಸ್ತಿಗಳು  :&lt;br /&gt;ಇತರೆ ಮಾಹಿತಿ ಚಿತ್ರಲೇಖ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8987342648027638234-4998338297531254479?l=samayadagombhe.blogspot.com' alt='' /&gt;&lt;/div&gt;</content><link rel='replies' type='application/atom+xml' href='http://samayadagombhe.blogspot.com/feeds/4998338297531254479/comments/default' title='Post Comments'/><link rel='replies' type='text/html' href='http://www.blogger.com/comment.g?blogID=8987342648027638234&amp;postID=4998338297531254479' title='0 Comments'/><link rel='edit' type='application/atom+xml' href='http://www.blogger.com/feeds/8987342648027638234/posts/default/4998338297531254479'/><link rel='self' type='application/atom+xml' href='http://www.blogger.com/feeds/8987342648027638234/posts/default/4998338297531254479'/><link rel='alternate' type='text/html' href='http://samayadagombhe.blogspot.com/2008/02/blog-post.html' title=''/><author><name>gandhidreams</name><uri>http://www.blogger.com/profile/08542097257960162147</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='26' src='http://3.bp.blogspot.com/-Zcwzeuv3kOg/TlIPoACWtAI/AAAAAAAAALo/KFLce5MDyok/s220/r.jpg'/></author><thr:total>0</thr:total></entry></feed>
